ವಿ.ಪಿ.ಕಂಬೈನ್ಸ್ ಲಾಂಛನದಡಿಯಲ್ಲಿ ವಿ.ಶ್ರೀನಿವಾಸ್ (ನಾಗೇನಹಳ್ಳಿ) ನಿರ್ಮಿಸುತ್ತಿರುವ ನಮ್ಮೂರ ಹೈಕ್ಳು ಚಿತ್ರದ ಚಿತ್ರೀಕರಣವು ಈಗ ಅಂತಿಮ ಘಟ್ಟ ತಲುಪಿದೆ.
ಚಿತ್ರಕ್ಕಾಗಿ ಪಾರಿಜಾತ ತೇಲಿ ಬಂತೀಗ
ಮೇಘವೇ ಸಂದೇಶ ತಂತೀಗ ಎಂಬ ಗೀತೆಯನ್ನು
ದೀಪ್ತಿ, ರಘು ರ ಮೇಲೆ ಹಾಗೂ ದಾನದಾನ ಮೈದಾನ ಎಂಬ ಐಟಂ ಹಾಡೊಂದನ್ನು ನೇಹಾ ಗುಪ್ತರ ಮೇಲೆ ಹಾಸನದ ಸುತ್ತ ಮುತ್ತ ಸ್ಟಾರ್ನಾಗಿ, ಮನು ನೃತ್ಯ ನಿರ್ದೇಶನದೊಂದಿದೆ ಮನು ಛಾಯಾಗ್ರಹಣದಲ್ಲಿ ನಿರ್ದೇಶಕ ಪ್ರಸನ್ನ ಚಿತ್ರಿಸಿಕೊಂಡರು.
ಚಿತ್ರಕ್ಕೆ ನಾಲ್ಕೈದು ದಿವಸಗಳ ಪ್ಯಾಚ್ವರ್ಕ್ ಮಾತ್ರ ಬಾಕಿ ಇದ್ದು, ಅದನ್ನು ಸದ್ಯದಲ್ಲಿಯೇ ಚಿತ್ರಿಸಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಚಿತ್ರಕ್ಕೆ ಮನು ಛಾಯಾಗ್ರಹಣ, ಶಕೀಲ್ ಅಹಮ್ಮದ್ ಸಂಗೀತ, ಕಲೈ, ರಘು ನೃತ್ಯ, ಥ್ರಿಲ್ಲರ್ ಮಂಜು ಸಾಹಸ, ವೇಣು ನಿರ್ಮಾಣ ಮೇಲ್ವಿಚಾರಣೆಯಿದ್ದು, ಚಿತ್ರದ ಕಥೆ ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನ ಪ್ರಸನ್ನ ಚಿತ್ರದ ಸಹ ನಿರ್ಮಾಪಕರು ರಂಗರಾಜು ಹಾಸನ್.
ತಾರಾಗಣದಲ್ಲಿ ಮಜಾ ಟಾಕೀಸ್ನ ಪವನ್, ಕುರಿಸುನೀಲ್, ತೇಜಸ್ ರಘುಹಾಸನ್, ವಿನಯ್ರಾಮ್, ಮಮತಾ ರಾವುತ್, ದೀಪ್ತಿ ಮನ್ನೆ, ರಚಿತಾ, ಅಣ್ಣಯ್ಯ, ಸುಚೇಂದ್ರ ಪ್ರಸಾದ್, ರಮೇಶ್ ಭಟ್, ಎಂ.ಎಸ್. ಉಮೇಶ್, ಚಿಕ್ಕಣ್ಣ, ಬಿರಾದಾರ್ ಮುಂತಾದವರಿದ್ದು ವಿಶಿಷ್ಟ ಪಾತ್ರವೊಂದರಲ್ಲಿ ಸತ್ಯಜಿತ್ ಕಾಣಿಸಿಕೊಳ್ಳಲಿದ್ದಾರೆ.